Ullal NewsUllal News
    Facebook Twitter Instagram
    Trending
    • What Does a Software Engineer Do?
    • ಮಾ.19 ರಂದು ಕೊರಗಜ್ಜನ ಆದಿಕ್ಷೇತ್ರಕ್ಕೆ ನಮ್ಮ ನಡೆ
      ಕದ್ರಿ ದೇವಸ್ಥಾನದಿಂದ ಕುತ್ತಾರು ಕೊರಗಜ್ಜನ ಕ್ಷೇತ್ರಕ್ಕೆ ಪಾದಯಾತ್ರೆ : ಬಿ.ನಾರಾಯಣ್ ಕುಂಪಲ
    • Strategies For Writing Survey Research Papers
    • Best Casino Games For Placement At Your Favorite Casino
    • Research Paper For Sale – Find a Publisher
    • Buy Essays Online To Get a Great Career
    • How to Write Essays – Your Essay Writing Process
    • The Day Before Sei Ihr Plagiat? Nachfolgende Fragmente Sie mr bonus sind Lebendig Nicht mehr da Weiteren Aufführen Herausgenommen
    Facebook Twitter Instagram
    Ullal NewsUllal News
    PLEASE SUPPORT US
    Thursday, March 23
    • Home
    • Account
    • Contact Us
    • ಗ್ರಾಮ
      • ಉಳ್ಳಾಲ
      • ತೊಕ್ಕೊಟ್ಟು
      • ಕೊಣಾಜೆ
      • ಮುಡಿಪು
      • ತಲಪಾಡಿ
      • ಕೋಟೆಕಾರು
      • ಸೊಮೇಶ್ವರ
    • ಪ್ರಮುಖ ಸುದ್ಧಿಗಳು
    • ಅಪರಾಧ ಸುದ್ದಿಗಳು
    PLEASE SUPPORT US
    Ullal NewsUllal News
    Home»ಗ್ರಾಮ»ಮುಂಡೋಳಿ,ಸೊಪ್ಪು ತಿಂದು ನಾಲ್ಕು ಜಾನುವಾರು ಗಂಭೀರ, ಒಂದು ಸಾವು, ಪಶುವೈದ್ಯರ ತಂಡದಿಂದ ಚಿಕಿತ್ಸೆ
    ಗ್ರಾಮ

    ಮುಂಡೋಳಿ,ಸೊಪ್ಪು ತಿಂದು ನಾಲ್ಕು ಜಾನುವಾರು ಗಂಭೀರ, ಒಂದು ಸಾವು, ಪಶುವೈದ್ಯರ ತಂಡದಿಂದ ಚಿಕಿತ್ಸೆ

    Ullal NewsBy Ullal NewsMarch 9, 2023Updated:March 9, 2023No Comments2 Mins Read
    IMG 20230309 WA0024
    Spread the news

    UN networks

    ಉಳ್ಳಾಲ: ಸೊಪ್ಪು ತಿಂದ ಎರಡು ಹಸುಗಳು, ಮೂರು ಕರುಗಳು ಅಸೌಖ್ಯಕ್ಕೀಡಾಗಿ ಗಂಭೀರ ಸ್ಥಿತಿ ತಲುಪಿದ್ದು, ಇದರಲ್ಲಿ ಒಂದು ಹಸು ಸಾವನ್ನಪ್ಪಿ ಉಳಿದ ನಾಲ್ಕು ಜಾನುವಾರುಗಳು ಗಂಭೀರ ಸ್ಥಿತಿಗೆ ತಲುಪಿದ ಘಟನೆ ಸೋಮೇಶ್ವರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮುಂಡೋಳಿ ಎಂಬಲ್ಲಿ ಸಂಭವಿಸಿದೆ. ಕೋಟೆಕಾರು ಪಶು ವೈದ್ಯಾಧಿಕಾರಿ ಡಾ. ಗಜೇಂದ್ರ ಕುಮಾರ್ ಪಿ.ಕೆ ನೇತೃತ್ವದಲ್ಲಿ ಚಿಕಿತ್ಸೆ ನಡೆಸಲಾಗುತ್ತಿದೆ.

    IMG 20230309 WA0010
    IMG 20230309 WA0011
    IMG 20230309 WA0013
    IMG 20230309 WA0014 1
    IMG 20230309 WA0014
    IMG 20230309 WA0017
    IMG 20230309 WA0019
    IMG 20230309 WA0020
    IMG 20230309 WA0021
    IMG 20230309 WA0025
    IMG 20230309 WA0022
    IMG 20230309 WA0023

    ಕೃಷಿಕ ಸಂಜೀವ ಪೂಜಾರಿ ಎಂಬವರಿಗೆ ಸೇರಿದ ಮನೆಯಲ್ಲಿ ಘಟನೆ ಸಂಭವಿಸಿದೆ. ಮಾ.8 ರ ಮಧ್ಯಾಹ್ನ ಮನೆಯವರು ಕರಿ ಬಸ್ರಿ ತಳಿಯ ಸೊಪ್ಪು ಜಾನುವಾರುಗಳು ಮಲಗುವ ಬೆಡ್ಡಿಂಗ್ ಗೆಂದು ಹಾಕಲಾಗಿದೆ. ಆದರೆ ಹಸುಗಳೆಲ್ಲಾ ಅದನ್ನೇ ತಿಂದ ನಂತರ ಅಸ್ವಸ್ಥತೆಗೆ ಒಳಗಾಗಿದೆ. ಸಂಜೆ ನಂತರ ಹಸುಗಳು ಕೆಲವು ಮಲಗಿದ್ದಲ್ಲೇ ಬಿದ್ದರೆ, ಇನ್ನುಳಿದ ಕಾಲುಗಳನ್ನು ನೆಲಕ್ಕೆ ಹೊಡೆಯುವ ರೀತಿಯಲ್ಲಿ ವರ್ತಿಸುತಿತ್ತು. ಇದನ್ನು ಗಮನಿಸಿದ ಮನೆಮಂದಿ ಕೋಟೆಕಾರು ಪಶುವೈದ್ಯರಿಗೆ ದೂರವಾಣಿ ಮೂಲಕ ತಿಳಿಸಿದ್ದರು . ಅವರು ಸಹಾಯಕ ಆಯುಕ್ತರ ತುರ್ತು ಸಭೆಯಲ್ಲಿದ್ದ ಕಾರಣ ಸಹಾಯಕರನ್ನು ಸ್ಥಳಕ್ಕೆ ಕಳುಹಿಸಿ ಪ್ರಾಥಮಿಕ ಚಿಕಿತ್ಸೆಯನ್ನು ಕೊಡಿಸಿದ್ದರು. ಇಂದು ಮುಂಜಾನೆ ವೇಳೆಗೆ ತಿಂದ ಎಲೆಗಳ ವಿಷಾಹಾರ ಹಸುವಿನ ಇಡಿ ದೇಹಕ್ಕೆ ಪಸರಿ ನಸುಕಿನ ಜಾವ ಒಂದು ಹಸು ಸಾವನ್ನಪ್ಪಿತ್ತು. ಇನ್ನುಳಿದ ಹಸುಗಳು ಗಂಭೀರ ಸ್ಥಿತಿಗೆ ತಲುಪಿದ್ದವು. ವಿಷಯ ತಿಳಿಯುತ್ತಿದ್ದಂತೆ ಗ್ರಾಮಸ್ಥರು ಮನೆಮುಂದೆ ಜಮಾಯಿಸಿದ್ದು, ಪಶುವೈದ್ಯರ ವಿರುದ್ಧ ಅಸಮಧಾನ ವ್ಯಕ್ತಪಡಿಸಿದರು. ಬಳಿಕ ಸ್ಥಳಕ್ಕಾಗಮಿಸಿದ ಕೋಟೆಕಾರು ಪಶು ವೈದ್ಯಾಧಿಕಾರಿ ಡಾ. ಚಂದ್ರಹಾಸ್ ನೇತೃತ್ವದಲ್ಲಿ ಚಿಕಿತ್ಸೆಯನ್ನು ಆರಂಭಿಸಲಾಯಿತು. ತಲಪಾಡಿ ಪಶು ವೈದ್ಯಾಧಿಕಾರಿ ಡಾ. ರಚನಾ ಅವರೂ ಸ್ಥಳಕ್ಕಾಗಮಿಸಿ ಗಂಭೀರ ಸ್ಥಿತಿಯಲ್ಲಿರುವ ಜಾನುವಾರುಗಳಿಗೆ ಚಿಕಿತ್ಸೆ ನಡೆಸುತ್ತಿದ್ದಾರೆ.

    ಜಾನುವಾರು ಮಲಗುವ ಹಟ್ಟಿಗೆ ಗೋಳಿ ಸೊಪ್ಪು (ಕರಿ ಬಸ್ರಿ) ಬೆಡಿಂಗ್ ಹಾಕಲಾಗಿದೆ. ಜಾನುವಾರುಗಳು ಆಕಸ್ಮಿಕವಾಗಿ ಅದೇ ಸೊಪ್ಪುಗಳನ್ನು ತಿಂದಿವೆ. ಅಧಿಕವಾಗಿ ತಿಂದಿರುವುದರಿಂದ ಪಾಯಿಸನಿಂಗ್ ಆಗಿದೆ. ರಕ್ತದ ಜೊತೆಗೆ ಸೇರಿಕೊಂಡು ಎಲೆಯಲ್ಲಿರುವ ಸೊನೆ ( ಸಿಸರ್ಸ್) ದೇಹದೊಳಕ್ಕೆ ಸ್ಟಿಕನಿಂಗ್ ಉಂಟಾಗಿದೆ. ಇದರಿಂದ ಒಂದು ಜಾನುವಾರು ಗಂಭೀರವಾಗಿ ಸಾವನ್ನಪ್ಪಿ, ಉಳಿದವುಗಳಿಗೆ ಚಿಕಿತ್ಸೆಯನ್ನು ಮುಂದುವರಿಸಲಾಗಿದೆ. ಮಾ. 17 ರಂದು ಇಲಾಖೆಗೆ ಸಂಬಂಧಿಸಿದ ಸಮ್ಮೇಳನ ನಡೆಯಲಿರುವ ಹಿನ್ನೆಲೆಯಲ್ಲಿ ಫಲಾನುಭವಿಗಳ ಗುರುತಿಸುವಿಕೆ ಹಿನ್ನೆಲೆ ನಿನ್ನೆ
    ಸಹಾಯಕ ಆಯುಕ್ತರು ಕೊಣಾಜೆಯಲ್ಲಿ ಸಭೆ ಕರೆಯಲಾಗಿತ್ತು. ಆದ್ದರಿಂದ ಖುದ್ದಾಗಿ ಬರಲು ಸಾಧ್ಯವಾಗಲಿಲ್ಲ. ಅದಕ್ಕಾಗಿ ಸಹಾಯಕ ಚಂದ್ರಹಾಸ್ ಎಂಬವರನ್ನು ಕಳುಹಿಸಿದ್ದೆನು.
    ಡಾ.ಗಜೇಂದ್ರ ಕುಮಾರ್ ಪಿ.ಕೆ
    ಕೋಟೆಕಾರು
    ಪಶುವೈದ್ಯಾಧಿಕಾರಿ

    ಉಳ್ಳಾಲ ತಾಲೂಕಿಗೆ ಒಬ್ಬರೇ ಪಶುವೈದ್ಯಾಧಿಕಾರಿ !
    ಇಡೀ ತಾಲೂಕಿಗೆ ಕೋಟೆಕಾರು ಪಶುವೈದ್ಯಾಧಿಕಾರಿ ಡಾ. ಗಜೇಂದ್ರ ಕುಮಾರ್ ಪಿ.ಕೆ ಒಬ್ಬರೇ ಕರ್ತವ್ಯ ನಿರ್ವಹಿಸುವಂತಾಗಿದೆ.
    ಪಾವೂರು, ಕೊಣಾಜೆ, ಅಂಬ್ಲಮೊಗರು , ಕುರ್ನಾಡು ಪಶುಚಿಕಿತ್ಸಾಲಯಗಳಲ್ಲಿ ವೈದ್ಯಾಧಿಕಾರಿಯೇ ಇಲ್ಲದೇ ಒಬ್ಬರೇ ಕಾರ್ಯನಿರ್ವಹಿಸುವಂತಾಗಿದೆ. ತಲಪಾಡಿಯ ಅಧಿಕಾರಿ ಡಾ. ರಚನಾ ಅವರಿಗೆ ಅಡ್ಯಾರು ಭಾಗದ ಜವಾಬ್ದಾರಿ ಇರುವುದರಿಂದ ಅವರೂ ತಾಲೂಕಿನಲ್ಲಿ ಕೆಲ ದಿನಗಳಷ್ಟೇ ಕರ್ತವ್ಯ ನಿರ್ವಹಿಸುವಂತಾಗಿದೆ. ಇದರಿಂದ ತಾಲೂಕಿನ ಬಹುತೇಕ ಕಡೆಗಳಲ್ಲಿ ಒಬ್ಬನೇ ಪಶುವೈದ್ಯಾಧಿಕಾರಿ ಕಾರ್ಯನಿರ್ವಹಿಸಬೇಕಿದೆ. ಸಹಾಯಕ ಇನ್ಸ್ ಪೆಕ್ಟರ್ ಹುದ್ದೆಯೂ ಖಾಲಿಯಾಗಿರುವುದರಿಂದ ಕರ್ತವ್ಯ ನಿಭಾಯಿಸುವುದೇ ಕಷ್ಟಸಾಧ್ಯ.

    Ullal News
    • Website

    แทงบอล เว็บแทงบอล

    Related Posts

    ಮಾ.19 ರಂದು ಕೊರಗಜ್ಜನ ಆದಿಕ್ಷೇತ್ರಕ್ಕೆ ನಮ್ಮ ನಡೆ
    ಕದ್ರಿ ದೇವಸ್ಥಾನದಿಂದ ಕುತ್ತಾರು ಕೊರಗಜ್ಜನ ಕ್ಷೇತ್ರಕ್ಕೆ ಪಾದಯಾತ್ರೆ : ಬಿ.ನಾರಾಯಣ್ ಕುಂಪಲ

    March 18, 2023

    ಮಂಗಳೂರು ವಿ.ವಿಯಿಂದ ಮೂವರಿಗೆ ಗೌರವ ಡಾಕ್ಟರೇಟ್ ಪದವಿ

    March 14, 2023

    ತೊಕ್ಕೊಟ್ಟು : ಅಮ್ಮ ಎಲೆಕ್ಟ್ರಾನಿಕ್ಸ್ ನಲ್ಲಿ
    ಮಹಾಕೂಲರ್ ಬಿಡುಗಡೆಗೊಳಿಸಿದ
    ಕೆನ್ ಸ್ಟಾರ್ ಕಂಪೆನಿಯ ಸಿಇಒ ಸುನಿಲ್ ಜೈನ್

    March 10, 2023

    Leave A Reply Cancel Reply

    News Categories
    Ullal News
    Facebook Twitter Instagram Pinterest
    © 2023 Ullalnews. Designed by Team Ullalnews.

    Type above and press Enter to search. Press Esc to cancel.